ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಎಂದಿಗೂ ನೆನಪಿನಲ್ಲಿ ಹಾಗೆ ಉಳಿದುಬಿಡುತ್ತವೆ. ಕೆಲವು ಮನಸ್ಸಿಗೆ ಮುದ ನೀಡಿದರೆ ಇನ್ನು ಕೆಲವು ಜೀವನದ ಪಾಟವನ್ನು ಕಲಿಸಿರುತ್ತವೆ . ಆದರು ಆಗಾಗ ಮನಸಿನ ಪರದೆ ಮೇಲೆ ಬಂದು ಹೋಗುವ ಈ ನೆನಪುಗಳು ಕೊಡುವ ಖುಷಿಯೇ ಬೇರೆ . ನನ್ನ ನೆನಪಿನ ಬುತ್ತಿಯಿಂದ ಆಯ್ದ ಕೆಲವು ಘಟನೆ, ವಿಷಯಗಳನ್ನ ಇಲ್ಲಿ ಬರೆದಿದ್ದೇನೆ ಇಷ್ಟವಾದರೆ ಖ೦ಡಿತ ಕಾಮೆಂಟ್ ಮಾಡಿ .

ನಮಗೆ ಏನೇ ಅಗತ್ಯ
ವಸ್ತು ಗಳು ಬೇಕಾದರೂ ಸುಮಾರು ೬ km ನಡೆದು ಸಾಗಿ ಕೊಳ್ಳಬೇಕು. ಅದು ಕೂಡ ಕಾಡಿನ ದಾರಿಯಲ್ಲೇ ಸಾಗಬೇಕು. ಈ
ದಾರಿಯಲ್ಲಿ ಸಿಗುವ ಒಂದೊಂದು ಪ್ರದೇಶವು ವಿಶಿಷ್ಟ ರೀತಿಯ ನಂಬಿಕೆ ಗಳಿಂದ
ಪ್ರಸಿದ್ದವಾಗಿದೆ.. ಕೆಲವು ದೇವರ ಜಾಗವೆಂದು ಪ್ರಸಿದ್ದವಾದರೆ ಇನ್ನು ಕೆಲವು ದೆವ್ವಗಳ ವಾಸಸ್ಥಾನ ವೆಂದು ಪ್ರಸಿದ್ದವಾಗಿದೆ.
ಅದರಲ್ಲೂ ಈ ಶಂಬುಬಟ್ಟನಕಟ್ಟೆ ಮೊದಲೇ ಕುಖ್ಯಾತಿ ಹೊಂದಿದ ಜಾಗ್.
ತನ್ನ ವಿಶಿಷ್ಟ ರೀತಿಯ ಮ್ಯಾನರಿಸಂ ನಿಂದ ಎಲ್ಲ ಮಕ್ಕಳಿಗೂ ತುಂಬಾ ಇಷ್ಟವಾಗುತಿದ್ದ ದಿನುಕಾಕ . ಅಸ್ಟೆ ಅಲ್ಲ ಎಲ್ಲರನ್ನು ಗೋಳು ಹೊಯ್ಕೊಲೋದ್ರಲ್ಲು ಎತ್ತಿದ ಕೈ. ಆದರು ಎಲ್ಲರಿಗು ಎಲ್ಲ ಕೆಲಸಕ್ಕೂ ಇವನೇ ಬೇಕು.
ಎಂತವರು ಓಡಾಡಲು ಹೆದರುತಿದ್ದ ದಾರಿಯಲ್ಲಿ ಎಸ್ಟೆ ರಾತ್ರಿ ಯಾದರು ಒಬ್ಬನೇ ಸಾಗುವ ಧೈರ್ಯವಂತ.
ಇ
ಘಟನೆಯ ಮುಖ್ಯ ಫಾತ್ರದಾರಿಯ ಪರಿಚಯ ನಿಮಗೆ ಮಾಡಿ ಕೊಡಲೇ ಬೇಕು. ಹೆಸರು ಪಕೀರಪ್ಪ ಗೌಡ. ನಮ್ಮ
ಮನೆಯಲ್ಲಿ ತೋಟದ ಕೆಲಸ ಮಾಡಲು ಬರುತ್ತಿದ್ದ ಆಳು . ನಮಗೆಲ್ಲರಿಗೂ ದೆವ್ವದ ಕಥೆ ಗಳನ್ನ ಹೇಳಿ ಹೆದರಿಕೆ ಹುಟ್ಟಿಸುತಿದ್ದ
ಪುಣ್ಯಾತ್ಮ . ನಮ್ಮುರಲ್ಲಿ ಜನರು ಮನಸ್ಸಿನಲ್ಲಿ ದೆವ್ವಗಳ ಬಗ್ಗೆ ಹೆದರಿಕೆ ಹುಟ್ಟಲು ಪ್ರಮುಖ ಕಾರಣ ಈ ಗೌಡರೆ.
ಇದೆಲ್ಲವನ್ನೂ ಅರಿತಿದ್ದ ದಿನು ಕಾಕಾ ಗೌಡರಿಗೆ ಚೆನ್ನಾಗಿ ಬುದ್ದಿ ಕಲಿಸಲು ಪಣ ತೊಟ್ಟಿದ್ದ. ಆದರು
ನಮ್ಮಜ್ಜ ಬಯ್ಯುತ್ತಾರೆ ಎಂಬ ಹೆದರಿಕೆಗೆ ಸುಮ್ಮನಿದ್ದ. ಅದೊಂದು ದಿನ ಸಾಯಂಕಾಲದ ಸಮಯದಲ್ಲಿ ನಾನು
ಮತ್ತು ದಿನು ಕಾಕಾ ಪಕ್ಕದ ಹಳ್ಳಿಗೆ ಹೋಗಬೆಕಾಯಿತು .ಅದು ಪಕಿರಪ್ಪನವರ ಹಳ್ಳಿ. ಅಲ್ಲಿಗೆ ಹೋಗಲು ನಾವು ಈ ಸೋಮ್ಬಟನ ಕಟ್ಟೆಯ
ಧಾರಿಯಲ್ಲೇ ಸಾಗಬೇಕಿತ್ತು.
ಅಲ್ಲಿ ಅಗತ್ಯ
ವಸ್ತುಗಳನ್ನ ಕೊಂಡು ನಾವು ಮನೆಗೆ ವಾಪಾಸಾಗುತಿದ್ದೆವು. ಆಗಲೇ ಸುಮಾರು ಕತ್ತಲೆ ಆವರಿಸಿತ್ತು. ನಾವು ಆ ಕಟ್ಟೆಯ ಹತ್ತಿರ ತಲುಪುತಿದ್ದಂತೆ ಇದ್ದಕಿದ್ದಂತೆ
ನಮಗೆ ಯಕ್ಷಗಾನದ ಹಾಡೊಂದು ಕೆಳತೊಡಗಿತ್ತು. ಆ ದ್ವನಿ ನಮ್ಮ ಗೌಡರದ್ದೆ ಎಂದು ತಿಳಿಯಲು ನಮಗೆ ಜಾಸ್ತಿ ಸಮಯ
ಹಿಡಿಯಲಿಲ್ಲ. ಆ ಮಂದ ಬೆಳಕಿನಲ್ಲೂ ನಮ್ಮ ಗೌಡರು ಹೆದರಿಕೆಯಿಂದ ಜೋರಾಗಿ ಹಾಡಿಕೊಂಡು ಹೋಗುತಿದ್ದುದು ನಮಗೆ ಕಾಣಿಸುತಿತ್ತು. ನಾವಿಬ್ಬರು
ಪಕ್ಕದೊಂದು ಪೊದೆಯ ಹಿಂದೆ ಅವಿತುಕೊಂಡೆವು. ಗೌಡರಿಗೆ ಬುದ್ದಿ ಕಲಿಸಲು ಪಣ ತೊಟ್ಟಿದ್ದ ದಿನುಕಾಕಾನ್ಗೆ ಒಳ್ಳೆ
ಅವಕಾಶ ದೊರೆತಂತಾಗಿತ್ತು. “ಇವತ್ತು ಇವಾನ್ಗೆ ಸರಿಯಾಗೇ
ಬುದ್ದಿ ಕಲಸ್ತೆ” ಅಂತ ಹೇಳುತ್ತಲ್ಲೇ ಪಕ್ಕದಲ್ಲೇ ಇದ್ದ ಚಿಕ್ಕ ಕಲ್ಲುಗಳನ್ನ ಬಾಚಿ
ಆವರ ಮೇಲೆ ಎಸೆದು ಜೋರಾಗಿ ಕಿರುಚ ತೊಡಗಿದ. ಆಗಲೇ ಅರ್ದ ಹೆದರಿಕೆಯಿಂದ ಬೆಂಡಾಗಿದ್ದ ಗೌಡರು ಎದ್ದೆನೋ ಬಿದ್ದೆನೋ ಅಂತ
ಜೋರಾಗಿ ಓಟಕಿತ್ತರು. ಅವರು ಓಡಿದ ವೇಗಕ್ಕೆ ನಿಮಿಷ ಮಾತ್ರ ದಲ್ಲೇ ಮನೆ ತಲುಪಿರಬಹುದೆಮ್ಬುದು ನಮ್ಮ ಅಂದಾಜು.
ಮಾರನೆದಿನ ಗೌಡರು ಕೆಲಸಕ್ಕೆ ಗೈರು. ಹೆದರಿ ಜ್ವರ ಬಂದು ಮಲಗಿದ್ದಾರೆ ಎಂಬ ಸುದ್ದಿ ನಮ್ಮನೆ
ತಲುಪಿತ್ತು.. ಅದಾದ ಮೂರ್ನಾಲ್ಕು ದಿನಗಳಲ್ಲಿ ಕೆಲಸಕ್ಕೆ ಬಂದ ಗೌಡರ ಕಥೆ ಮಾತ್ರ
ಎಲ್ಲರನ್ನು ಬೆಚ್ಚಿ ಬಿಳಿಸಿತ್ತು. ತಮ್ಮ ಕಲ್ಪನೆಗೆ ಬಂದಂತೆ ಕಥೆಯ ಹೆಣೆದು. ವಿಕಾರವಾದ ಒಂದು
ದೆವ್ವ ವನ್ನು ಅವರ ಕಥೆ ಯಾ ಮುಖ್ಯ ಪಾತ್ರದಾರಿಯಾಗಿಸಿ ನಮ್ಮ ಮನೆಯವರಿಗೆಲ್ಲ “ZEE HORROR SHOW” ಆನ್ ತೋರಿಸಿಬಿಟ್ಟರು. ಇದಾದ ಕೆಲವೇ ದಿನಗಳಲ್ಲಿ ಊರವರ
ಬಾಯಲೆಲ್ಲ ಇದೆ ಕಥೆ. ಏನೇ ಆದರು ಊರಿಲ್ಲಿ
ಇನ್ನೊಂದು HORROR ಕಥೆಯನ್ನು
ಹುಟ್ಟುಹಾಕಿದ ಕೀರ್ತಿ ಮಾತ್ರ ನಮ್ಮದು :) ...
ಮುರೂರಿನಿಂದ ಹೊನ್ನಾವರಕ್ಕೆ ಬಂದಾಗಲು ಸ್ವಲ್ಪದಿನ ಈ ನೆನಪುಗಳು
ಕಾಡಿತ್ತಾದರು ಜೀವನ ಕಷ್ಟ ಅನ್ದನಿಸಿರಲಿಲ್ಲ.. ಮಲೆನಾಡ ಪರಿಸರದಿಂದ ಸಿದಾ ಕರಾವಳಿ ಕಡೆಗೆ ಬಂದ
ನಾನಗೆ ನನ್ನ ಸುತ್ತಲಿನ ಪರಿಸರ ಎಲ್ಲವನ್ನು ಮರೆಸುವಂತೆ ಮಾಡಿತ್ತು.. ಕನ್ನಡ ಮಾದ್ಯಮ ಶಾಲೆಗೆ
ಸೇರಿದ ಮೇಲೆ ನಾನು ಕೊಂಕಣಿ ಕಲಿತಿದ್ದು ಮಾತ್ರ ವಿಪರ್ಯಾಸ J.
ಮನೆಯಲ್ಲಿ ಹೇಳದೆ ಹೋಗಿ ಶಂಖತಿರ್ಥದಲ್ಲಿ ಇಜಿದ್ದು. ಸಮುದ್ರದಲ್ಲಿ ಈಜಿ ಏನೋ ಸಾದಿಸಿದ
ಸಂತೋಷದಲ್ಲಿರುವಾಗ ತಿಂದ ಅಪ್ಪನ ಎಟು. “ಅಬ್ಬ ಆ ಏಟು” J..ಆ
ಮೇಲೆ ಸಿಕ್ಕ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲಾದಿತೆ.

----------------------------------------------------------------------------------
![]() |
ನಮ್ಮೆಸ್ಟ್ರು |
----------------------------------------------------------------------------------
ಇದಾದ ನಂತರ
ಶುರುವಾಗಿದ್ದು ನಮ್ಮ ಅಮ್ಮನ ಹಠ.. ನಾನು Flutist ಆಗಬೇಕೆಂಬುದು ಅವರ ಹಂಬಲ.
ಜಾತ್ರೆಯಲ್ಲಿ ಸಿಗುವ ಪಿಪಿ ಯನ್ನೇ ಸರಿಯಾಗೆ ಉದಲು ಬಾರದ ನಾನು ಕೊಳಲು ಕಲಿಯೋದು ಹೇಗೆ ? ಎಂಬುದು
ನಮಪ್ಪನ ಪ್ರಶ್ನೆ.. ಹಲವಾರು ದಿನಗಳ ವಕ್ಸಮರದ ನಂತರ ಕೊನೆಗೊಂದು ದಿನ ನಿರ್ಧಾರ ವಾಗಿಯೇ
ಬಿಟ್ಟಿತ್ತು. ನನ್ನಷ್ಟೇ ಉದ್ದದ ಕೊಳಲನ್ನ ತಂದು ನನ್ನ ಕೈಯಲ್ಲಿ ಇಟ್ಟೆ ಬಿಟ್ಟರು..
ಇಲ್ಲಿ ನನ್ನ ಗುರುವಾದವರು ಸುಬ್ರಾಯ ಭಂಡಾರಿಯವರು.. ಎಲ್ಲರನ್ನು
ಮಂತ್ರ ಮುಗ್ದವಾಗಿಸುತಿದ್ದ ಅವರ ಕೊಳಲು ನನ್ನನ್ನು ಅದರ ವಶಕ್ಕೆ ತೆಗೆದುಕೊಂಡು ಬಿಟ್ಟಿತು. ೩ ವರ್ಷ ಅವರಿಂದ
ಹಿಂದುಸ್ತಾನಿ ಶೈಲಿಯಲ್ಲಿ ಕೊಳಲನ್ನು ಕಲಿತೆ.ಎಸ್ಟೆ ಕಲಿತರು ಅವರ ಸರಿಸಮಾನವಾಗಿ ಬಾರಿಸೋದು
ಅಸಾದ್ಯ ಎನಿಸಿತು. ಆಸ್ಟೋ ಇಸ್ಟೊ ಕಲಿತರು ಇಂದಿಗೂ ಮನಸಿಗೆ ಬೇಸರವಾದಾಗ ನಾನು ಆಶ್ರಯಿಸೊದು
ಸಂಗೀತವನ್ನೇ..

ನೆನಪೆಂಬ ಸಾಗರದಲ್ಲಿ ಹುಡುಕಿದಾಗ ಸಿಕ್ಕಿದ ಮುತ್ತುಗಲಿಸ್ಟು. ಸಿಗದವು ಇನ್ನೆಸ್ಟೋ .... ಈಗ ಸಿಗದವು ಗಳನ್ನೂ ಮುಂದೆ ಹೆಕ್ಕಿ ತರುವ ಪ್ರಯತ್ನವನ್ತು ಖಂಡಿತ ಮಾಡುತ್ತೇನೆ... ಧನ್ಯವಾದಗಳು...........