Monday, September 17, 2012

ಭಾವ ಚಿತ್ತಾರ

                   ಹಲವಾರು ದಿನಗಳಿಂದ ಬ್ಲಾಗ್ ಕಡೆ ತಲೆ ಹಾಕಿರಲಿಲ್ಲ.. ಆದರು ಬರೆಯುವ ಹಂಬಲ... ಇತ್ತೀಚಿಗೆ ನಾ ಬರೆದ ಕೆಲವು sketches ಗಳನ್ನ ಇ ಬ್ಲಾಗ್ ಪೋಸ್ಟಿನಲ್ಲಿ ಹಾಕಿರುತ್ತೇನೆ. ಇಷ್ಟವಾದರೆ ಖಂಡಿತ ಕಾಮೆಂಟ ಮಾಡಿ ... ಸಲಹೆ ಗಳನ್ನೂ ಕೂಡಾ ಬರೆಯಿರಿ....

                                                          Madushaala          

  
 Plumeria

 Lotus

Life in Glass

Vignahartha

 Shiradipura Vaasi

 Naatya Visharada
                                                                GAJANAN

Wednesday, May 23, 2012

ಮೇಸ್ಟ್ರು ಹೇಳಿದ ಕಥೆ....

           ಆಗಲೇ ಸಮಯ ೩ ಆಗಿತ್ತು. ಶಾಲಾ ಕೊಟಡಿ ಯೊಳಗೆ ಕೂತಿದ್ದ ನಮಗೆ ಅದು ಇಂಗ್ಲೀಷ್ ಕ್ಲಾಸಿನ ಸಮಯ. ಆದರೆ ಅದು ನಮಗೆ ನಿದ್ದೆ ಯ ಸಮಯ ಕೂಡ ಹೌದು !!! ಕಣ್ಣು ಮುಚ್ಚದೇ ನಿದ್ದೆ ಮಾಡುವ ಕಲಾವಿದರಿಂದ ಹಿಡಿದು ತೂಕಡಿಸಿ ಬೀಳುವ ಯೋಗಿ ಗಳು ನಮ್ಮ ಕ್ಲಾಸಿನಲ್ಲಿ ಇದ್ದರು. ನಮಗೆ ಇಂಗ್ಲಿಷ್ ಕ್ಲಾಸ್ಸೆಂದರೆ ಸ್ವಲ್ಪ ಅಚ್ಚು ಮೆಚ್ಚು. ಕಾರಣ ಅದನ್ನು ಬೋದಿಸುತಿದ್ದುದು "S.J.ಕೈರನ್ನ " ಮೇಸ್ಟ್ರು .  ಇವರ ಬಗ್ಗೆ ಹೇಳಬೇಕೆಂದರೆ ಅತ್ಯಂತ ಚಾಣಕ್ಷ ,ತನ್ನ ಮಾತಿನಿಂದ  ಎಂತವರನ್ನು ಮೂಕ ವಿಸ್ಮಿತರನ್ನಾಗಿ ಮಾಡಬಲ್ಲ  ವಾಗ್ಮಿ. "ಇಂಗ್ಲೀಷಿನಲ್ಲಿ ಒಂದು ಮಾತಿದೆ" ಎಂದು ಶುರುವಾಗುತಿದ್ದ ಅವರ ಭಾಷಣ ಕೇಳುವುದೇ ಒಂದು ರೋಮಾಂಚನ.
         ಅಂದು  ಕೂಡ ಲಗು ಬಗೆ ಇಂದ ಕ್ಲಾಸ್ಸನ್ನು  ಪ್ರವೇಶಿಸಿದ ಮೇಸ್ಟ್ರಿಗೆ ನಮ್ಮ ಪರಿಸ್ಥಿತಿ ಕಂಡು ಮರುಕ ಹುಟ್ಟಿರ ಬೇಕು. ಅದಕ್ಕೆ ಇವತ್ತು ನಾನು ನಿಮಗೆ ಯಾವುದೇ ಪಾಠ ಮಾಡುವುದಿಲ್ಲ ಎಂದರು.  ಅದನ್ನ ಕೇಳಿದ ಎಲ್ಲರಿಗೂ ಖುಷಿ ಯಾಗಿತ್ತು.. ಆದರೆ ಕೆಲವರಿಗೆ ಅಪಾಯದ ವಾಸನೆ ಬಂದಿದ್ದು ಕೂಡ ನಿಜ. ಇವತ್ತು ನಾವು ಕಷ್ಟದ ಬಗ್ಗೆ ಮಾತಾಡೋಣ ಎಂದರು. ಆಗಲೇ ನಮಗೆ ನಮ್ಮ ಮುಂದಿರುವ  ಅಪಾಯದ ಸ್ಪಷ್ಟ  ಚಿತ್ರಣ ಲಭಿಸಿತ್ತು. ಕಾರಣ ಒಮ್ಮೆ ಅವರು ಮಾತು ಶುರು ಮಾಡಿದರೆ ಶಾಲೆಯ ಸಮಯ ಮುಗಿದರು ಬಿಡುತ್ತಿರಲಿಲ್ಲ. ಹಾಗು ಅಸ್ಟೊಂದು ಮಾತನ್ನು ಕೇಳುವ ತಾಳ್ಮೆ ಯಾಗಲಿ ಸಹನೆ ಯಾಗಲಿ ನಮ್ಮಲ್ಲಿ ಇರಲಿಲ್ಲ. ಆದರು ಅದನ್ನು ವಿರೋಧಿಸುವ ಧೈರ್ಯವು ಇರಲಿಲ್ಲ.
        ಕೈರನ್ನ  "ಕಷ್ಟ ಎಂದರೇನು ? " 
        ಹಿಂದಿನ ಬೆಂಚಿನಿಂದ ಪಿಸು ದನಿ ಯಲ್ಲಿ  ಬಂದ ಉತ್ತರ  "ನೀವೀಗ ನಮಗೆ ಕೊಡುತಿರುವುದು".
        ಎಲ್ಲರು ಜೋರಾಗಿ ನಗ ತೊಡಗಿದ್ದರು.. ಈ ನಗುವಿನಲ್ಲೇ ಎಲ್ಲರ ನಿದ್ದೆಯು ಮಾಯಾವಾಗಿತ್ತು. 
       ಇದನ್ನು ಸಹಿಸಿ ಕೊಂಡ ಮೇಸ್ಟ್ರು  ಒಂದು ಕಥೆಯನ್ನ ಹೇಳೋಕೆ ಮುಂದಾದರು.. ಕಥೆ ಎಂದ ಕೂಡಲೇ ಎಲ್ಲರ ಕಿವಿಯು ನೆಟ್ಟಗಾಗಿದ್ದು ನಿಜ.

ಕೈರನ್ನ್     " ಒಂದು ಊರಿನಲ್ಲಿ ಒಬ್ಬ ಮನುಷ್ಯ ದೇವರನ್ನ ಕುರಿತು ತಪಸ್ಸು ಮಾಡಲು ಸಮುದ್ರ ತೀರಕ್ಕೆ ಹೋಗುತ್ತಾನೆ !!!
ಎಲ್ಲರು ತಪಸ್ಸು ಮಾಡಲು ಕಾಡಿಗೆ ಹೋದರೆ ಇವನ್ಯಾರೋ ತಪಸ್ಸು ಮಾಡಲು  ಸಮುದ್ರ ತೀರಕ್ಕೆ ಯಾಕೆ ಹೋಗುತ್ತಾನೆ ಎಂಬುದು ನಮಗೆ ಕಾಡಿದ ಪ್ರಶ್ನೆ...  ಏನೇ ಇರಲಿ ಮತ್ತೆ ಕಥೆ ಗೆ ಹೋಗೋಣ ..

   "ಸಮುದ್ರ ತೀರದಲ್ಲಿ ಗೊರವಾದ ತಪಸನ್ನು ಮಾಡಿ ದೇವರನ್ನು ಮೆಚ್ಚಿಸುತ್ತಾನೆ " 
   ನಮಗೆ ಕಾಡಿದ ಇನ್ನೊಂದು ಪ್ರಶ್ನೆ. " ಯಾವ ದೇವರು ??" 

       "ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ದೇವರು ವರವನ್ನು ಬೇಡು ವಂತೆ ಕೇಳುತ್ತಾನೆ. ಇದಕ್ಕೆ ಆ ಬುದ್ದಿವಂತ ಮಾನವ 'ನಾನು ನನ್ನ ಜೀವನ ಮುಗಿಸುವರೆಗೂ ನೀನು ನನ್ನ ಜೊತೆ ಇರಬೇಕು ' ಎಂದು ವರ ಬೇಡುತ್ತಾನೆ "

       "ದೇವರು ಇದಕ್ಕೆ ಒಪ್ಪಿ ಅವನ ಜೊತೆ ಜೀವನ ಪಯಣದಲ್ಲಿ ಜೊತೆ ಯಾಗಿ ಸಮುದ್ರ ತೀರದಲ್ಲಿ ನಡಿಯುತ್ತಾನೆ "
      "ಆ ಮನುಷ್ಯ ತುಂಬಾ ಸಂತೋಷ ವಾಗಿರುವ ಸಮಯದಲ್ಲಿ ಹಿಂದುರುಗಿ ನೋಡಿದಾಗ ೨ ಜೊತೆ ಹೆಜ್ಜೆ ಗುರುತು ಗಳು ಮರಳಿನಲ್ಲಿ ಮೂಡಿರುತ್ತವೆ. ದೇವರು ನನ್ನ ಜೊತೆಯಲ್ಲೇ ಇರುವನೆಂದು ಸಂತೋಷದಿಂದ ಮುಂದುವರಿಯುತ್ತಾನೆ "
 ಈಗ ನಮ್ಮ ಮೊದಲನೇ ಪ್ರಶ್ನೆ ಗೆ ಉತ್ತರ  ದೊರತಿತ್ತು.

Back to story "ಸ್ವಲ್ಪ ದೂರ ಸುಖ ಜೀವನದಲ್ಲಿ ಸಾಗಿದಾಗ ಅವನಿಗೆ ಕಷ್ಟದ ದಿನಗಳು ಶುರುವಾಗತ್ತೆ. ಆತ ಮತ್ತೆ ಹಿಂದುರುಗಿ ನೋಡುತ್ತಾನೆ. ಏನ್ ಆಶ್ಚರ್ಯ! ಸುಖದ ದಿನದಲ್ಲಿ ಜೊತೆ ಗಿದ್ದ ದೇವರ ಹೆಜ್ಜೆ ಗುರುತು ಗಳು ಈಗ ಮಾಯಾ. ಒಂದೇ ಜೊತೆ ಆಳ ವಾಗಿರುವ ಹೆಜ್ಜೆ ಗುರುತು ಮಾತ್ರ ಮೂಡಿವೆ!" 

     ಈಗ ನಮ್ಮ ತಲೆ ಗೆ ಹೊಳೆದ ಹಾಡು "ಕಾಣದಂತೆ ಮಾಯವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು".

ಏನೇ  ಇರಲಿ "ಹಾಗೆ ಸ್ವಲ್ಪ ದೂರ ಸಾಗಿದ ನಂತರ ಮತ್ತೆ ಸುಖದ ದಿನಗಳು ಶುರು ವಾಗುತ್ತದವೆ . ಆಗಲು ಆ ಮಾನವ ಮತ್ತೆ ಹಿಂದುರುಗಿ ನೋಡುತ್ತಾನೆ....ಆಶ್ಚರ್ಯ!!!! ಕಷ್ಟದ ದಿನದಲ್ಲಿ ಮಾಯಾ ವಾಗಿದ್ದ ದೇವರ ಹೆಜ್ಜೆ ಗುರುತು ಮತ್ತೆ ಪ್ರತ್ಯಕ್ಷ ವಾಗಿರುತ್ತದೆ ".

      ಈಗ ಮಾನವನಿಗೆ ತುಂಬಾ ಕೋಪ ಬರುತ್ತದೆ .. ದೇವರನ್ನು ಕೇಳುತ್ತಾನೆ
 "ಅಯ್ಯ ದೇವರೇ ಸುಖ ದ ಸಮಯದಲ್ಲಿ ಜೊತೆ ಗಿದ್ದ  ನಿನ್ನ ಹೆಜ್ಜೆ ಗುರುತು ಕಷ್ಟ ದ ಸಮಯದಲ್ಲಿ ಏಕೆ ಮಾಯಾ ವಾಗಿತ್ತು ??" 
ಇದು ಆ ಸಮಯದಲ್ಲಿ ನಮಗೆ ಕಾಡಿದ ಪ್ರಶ್ನೆಯು ಹೌದು ..

      ದೇವರು ಈಗ ನಗು ನಗುತ್ತ ಹೇಳುತ್ತಾನೆ    "ಅಯ್ಯಾ  ಮೂರ್ಖ , ಕಷ್ಟದ ಸಮಯದಲ್ಲಿ ಇರುವ ಆ ಹೆಜ್ಜೆ ಗುರುತು ಅದು ನಿಂದಲ್ಲ, ಅದು ನನ್ನ ಹೆಜ್ಜೆ ಗುರುತು . ನೀನು ಸುಖದಲ್ಲಿ ಇರುವಾಗ ನಿನ್ನ ಜೊತೆ ನಡೆದೇ . ಆದರೆ ನೀನು ಕಷ್ಟ ದಲ್ಲಿ ಇರುವಾಗ ನಿನ್ನ ನಾನು ಎತ್ತಿ ಕೊಂಡು ಸಾಗಿದೆ " ಎಂದ .
    
      ಈ ಕಥೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು.. ಆ ದಿನ ರಾತ್ರಿ ಪೂರ್ತಿ ಇದರ ಬಗ್ಗೆ ಯೋಚನೆ ಮಾಡಿದೆ. ಯಾವಾಗಲು ನಾನು ಕಷ್ಟ ದಲ್ಲಿ ಇರುವೆನೆಂದು ಅನಿಸಿದಾಗ ನನಗೆ ಈ ಕಥೆ ನೆನಪಾಗುತ್ತದೆ.. ಜೀವನದ ಎಲ್ಲ ಸಮಯದಲ್ಲೂ ದೇವರು ನಿಮ್ಮ ಜೊತೆ ಇರುತ್ತಾನೆ ಎಂದು ಧೈರ್ಯ ತುಂಬಿದ ಕಥೆಗು , ಕಥೆ ಯನ್ನೂ ಹೇಳಿದ ಕೈರನ್ನರಿಗೂ ಹೆಟ್ಸ್ ಆಫ..

 ಆದರೆ  ಮುಂದಿನ ಮೂರು ವರ್ಷ ಗಳಲ್ಲಿ ಇದೆ ಕಥೆಯನ್ನೂ ೧೫-೨೦ ಬಾರಿ ಕೆಳ ಬೇಕಾಗಿ ಬಂತು. ಆ ಸಮಯದಲ್ಲೆಲ್ಲ ದೇವರು ನಮ್ಮನ್ನು ಹೊತ್ತು ಸಾಗುತಿರುವನೆಂಬ ಭಾವ ನಮ್ಮದು !!!! 
   


    

Friday, March 30, 2012

ಚಿಗುರು ಮನಸು (ನವಿಲು ಗರಿ)

ನವಿಲು ಗರಿ...
                    ಆಗಷ್ಟೆ  ಪೂರ್ವದಲ್ಲಿ  ಸೂರ್ಯದೇವ ತನ್ನ ದಿನಚರಿ ಆರಂಬಿಸಿದ್ದ.. ಮುಂಜಾನೆಯ ಇಬ್ಬನಿ ಮಂಜು ಕರಗುತಿತ್ತು .. ಆಗಷ್ಟೆ  ಎದ್ದು ಅಮ್ಮನನ್ನ ಹುಡುಕಿ ಹೊರ ಬಂದ ಪುಟ್ಟನಿಗೆ ಆಶ್ಚರ್ಯವೊಂದು ಕಾದಿತ್ತು.. ಮನೆ ಮುಂದಿನ ವಿಶಾಲ ಅಂಗಳದಲ್ಲಿ ಕಾಡಿನ ಅತಿಥಿಯೊಬ್ಬರು ಬಂದಿದ್ದರು..  ಚುಮು ಚುಮು ಮುಂಜಿನ ನಡುವೆ ಕಂಡ ಆ ಆಕ್ರತಿ ಪುಟ್ಟನಿಗೆ ಎಲ್ಲಿಲ್ಲದ ಹರುಷ ತಂದಿತ್ತು..
                 " ಅಪ್ಪಯ್ಯ , ಅಪ್ಪಯ್ಯ ....ಯಮ್ಮನಿಗೆ ನವಿಲು ಬಂದಿದ್ದು... ಎನ್ಕೆ ಅದು ಬೇಕು.... ಹಿಡ್ಕೊಡು...ನಾನು ಅದ್ರ ಸಂಗತ ಆಡ್ತೆ... ಹಿಡ್ಕೊಡು ಅಪ್ಪಯ್ಯ"
                ಪುಟ್ಟನ  ಕೂಗನ್ನ ಕೇಳಿದ ಅನಂತ ಭಟ್ರು  "ಏನಾಯ್ತ ತಮ್ಮ, ಎಂಥ ಹಿಡ್ಕೊಡ್ಬೇಕ ನಿಂಗೆ ?" ಎಂದು ಕೇಳುತ್ತ ಹೊರಬಂದರು. ತಮ್ಮ ಅಂಗಳದಲ್ಲೇ ಓಡಾಡುತಿದ್ದ ನವಿಲನ್ನ ಕಂಡರು ಅಷ್ಟೇನು ಆಶ್ಚರ್ಯ ಚಕಿತರಾಗದೆ  "ಯವಗ್ಗು ಅದು ಬತ್ತು , ನೀ  ಅದನ್ನ ನೋಡಿದಿಲ್ಯೇ  "ಎಂದರು.
                ಆದರು ಹಠ ಬಿಡದ ಪುಟ್ಟ "ನಂಗ ಅದು ಬೇಕು, ನನ್ನ ಸಂತಿಗೆ ಆಟಾದ್ಲು ಯಾರು ಇಲ್ಲೇ , ನಾ ಅದ್ರ ನನ್ನ ಗೆಳೆಯನ್ನ ಮಾಡ್ಕಂತೆ, ಹಿಡ್ಕೊದು ಅಪ್ಪಯ್ಯ  " ಎಂದು ಅಜ್ಜನ ಪಿಡಿಸ ತೊಡಗಿದ.
           "ಅದನ್ನ ಹಿಡ್ಕನ್ದೊಗಿ ನಾಗಿ ಮನೆ ಕೋಳಿ ಗುಡ್ನಾಗೆ  ಬಿಟ್ಟು ಸಾಕುವ  ಅಪ್ಪಯ್ಯ  "
               ಪುಟ್ಟನ ಹಟವ ಕಂಡ ಅನಂತ್ ಭಟ್ಟರು ಅವನ ಸಮಾದಾನ ಪಡಿಸೋಕೆ ಹರ ಸಾಹಸ ಪಟ್ಟರು. ಕೊನೆಗೆ  " ತಮ್ಮಣ್ಣ, ನವಿಲ ಹಕ್ಕಿ ದೇವರ ವಾಹನ, ಅದನ್ನ ಹಿಡದ್ರೆ ಸುಬ್ಬಣ್ಣ ಶಾಪ ಕೊಡ್ತಾ " ಎಂದರು .
                ಅರೆ ಮನಸಿನಿಂದ ಅದನ್ನ ಒಪ್ಪಿ ಕಾಡಿನ ಕಡೆಯಲ್ಲಿ ಮರೆ ಯಾಗುತಿದ್ದ ನವಿಲನ್ನ ಕಂಡು ಬಿಕ್ಕಿ ಬಿಕ್ಕಿ ಅತ್ತು.. ಅಮ್ಮನ ಸೆರಗು ಸೇರಿ ಕೊಂಡ.
                ಮನೆ ಕೆಲಸದ ಸುಬ್ಬಿ ಇದನ್ನೆಲ್ಲಾ ದೂರದಿಂದಲೇ ನೋಡಿ "ನಮ್ಮ ಪುಟ್ಟಪ್ಪಂಗೆ  ನವಿಲ ಸಂತಿಗೆ ಆಡು ಆಸೆ ಅಂತೆ.
ಪಾಪ ತೀಡಿ ತೀಡಿ ಮುಖ ಎಲ್ಲವ ಕೆಮ್ಪಗಾಗೊಗದೆ " ಎಂದು ಗೊಣಗುತ್ತಲೇ ಅಂಗಳವನ್ನು ಗುಡಿಸೋಕೆ ಮುಂದಾದಳು.
               ಗುಡಿಸುತ್ತಿರುವಾಗ ಇದ್ದಕಿದ್ದಂತೆ "ಪುಟ್ಟಪ್ಪ ಪುಟ್ಟಪ್ಪ " ಎಂದು ಕೂಗ ತೊಡಗಿದಳು .
    ಆಶ್ಚರ್ಯದಿಂದಲೇ ಹೊರಗೋಡಿ ಬಂದ ಪುಟ್ಟನಿಗೆ ಸುಬ್ಬಿ ಕೈಯಲ್ಲಿದ್ದ ವಸ್ತುವನ್ನ ಕಂಡು ಖುಶಿ ಇಂದ ಕುಣಿದು ಕುಪ್ಪಳಿಸಿದ...
ಸುಬ್ಬಿ "ಪುಟ್ಟಪ್ಪ , ನವಿಲು ನಿಮಗೆ ಬಹುಮಾನ ಕೊಟ್ಟದೇ, "  ಎಂದು ಹೇಳಿ ನವಿಲು ಗರಿಯನ್ನ ಪುಟ್ಟನ ಕೈ ಗಿತ್ತಳು...
ಅದನ್ನ  ಹಿಡ್ಕೊಂಡು ಒಂದೇ ಓಟದಲ್ಲಿ ಅಮ್ಮನ ಮುಂದೆ ಪ್ರತ್ಯಕ್ಷನಾದ "ಆಯಿ, ಇಲ್ನೋದೆ ನಂಗೆ ನವಿಲು ಬಹುಮಾನ ಕೊಟ್ಟಿದ್ದು " ಎಂದು ನವಿಲು ಗರಿಯನ್ನು ಅಮ್ಮನಿಗೆ ತೋರಿಸ ತೊಡಗಿದ.
               ಅಮ್ಮಾ  "ಅದನ್ನ ಜೋಪನವಗೆ ಇಟ್ಕೊಳವು" ಎಂದಳು ..
          ಅಂದು ಬೆಳಗಿನಿಂದ ಸಂಜೆಯ ವರೆಗೆ ಒಂದು ಕ್ಷಣವೂ ಆ ಗರಿ ಇಂದ ದುರಾಗದ ಪುಟ್ಟ. ಕೃಷ್ಣನಂತೆ ತಾನು ತಲೆಗೆ  ಅದನ್ನ ಕಟ್ಟಿ ಕೊಂಡು ಕುಣಿದಾಡಿದನು.ಮನೆಗೆ ಬಂದವರಿಗೆಲ್ಲ ಅದನ್ನ ತೋರಿಸಿ ಖುಶಿ ಪಟ್ಟಿದ್ದನು .
            ಆ ಸುಂದರವಾದ ನವಿಲು ಗರಿ ಪುಟ್ಟನ ಕಣ್ಣಲ್ಲಿ  ನೂರಾರು ಸುಂದರ ಚಿತ್ರಗಳನ್ನೂ ಮುಡಿಸುತಿದ್ದವು.. ಅದು ನಮ್ಪುಟ್ಟನಿಗೆ ಬರಿ ನವಿಲು ಗರಿಯಾಗಿರಲಿಲ್ಲ ಕಲ್ಪನೆಯ ಲೋಕದಲ್ಲಿ ಅವನನ್ನು ತೆಲಿಸುತಿದ್ದ ಮಾಯಾ ದಂಡವಾಗಿತ್ತು. ಮಲಗುವಾಗ  ಕೂಡಾ ಅದನ್ನ ತನ್ನ ಪಕ್ಕದಲ್ಲೇ ಪುಟ್ಟ ಮಗುವಿನಂತೆ ಮಲಗಿಸಿಕೊಂಡು  ಅದರಲ್ಲಿನ ಸಾವಿರ ಬಣ್ಣಗಳಿ೦ದ ಮನದ ಪಟದ ಮೇಲೆ ಸುಂದರ ಚಿತ್ರಗಳನ್ನ ಬಿಡಿಸಿಕೊಳ್ಳುತ್ತಾ  ಅಮ್ಮನ ಮಡಿಲಿಂದ ನಿದ್ರಾದೇವತೆಯ ಮಡಿಲಿಗೆ ಜಾರಿದ್ದ..


ಚಿಗುರು ಮನಸು (ಮಳೆಗಾಲದ ಒಂದು ದಿನ )

 ಮಳೆಗಾಲದ ಒಂದು ದಿನ     
                    ಕೋಳಿ ಕೂಗಿ ಸಾಕಷ್ಟು  ಹೊತ್ತಾದರೂ ಸೂರ್ಯ ದೇವನ ದರ್ಶನ ವಾಗಿರಲಿಲ್ಲ. ಕಾರಣ ಅದು ಮಲೆನಾಡಲ್ಲಿ ಮಳೆಗಾಲದ ಸಮಯ. ರಾತ್ರಿ ಇಂದ ಸುರಿಯುತ್ತಿರುವ ದಾರಕಾರ ಮಳೆಗೇ ಮುರಿದು ಬಿದ್ದ ಅಡಿಕೆ ಮರಗಳನ್ನ ಹಿತ್ತಿಲ ಬಾಗಿಲಲ್ಲೇ ನಿಂತು ನೋಡಿ ಮರುಕ ಪಟ್ಟ ಅನಂತ ಭಟ್ಟರು "ಹಾಲ್ಬಿದ್ದ ಮಳೆ ಬಂದು ಇ ಸಲದ ಬೆಳೆ ಎಲ್ಲ ಹಾಳಾತ್ತು" ಎಂದು ಮಳೆ ಗೆ ಹಿಡಿ ಶಾಪ ಹಾಕುತ್ತ ಕೊಟ್ಟಿಗೆಯ ಕಡೆಗೆ ದನಗಳನ್ನ ನೋಡಿ ಬರಲು ಹೊರಟರು.
      ಬೆಚ್ಚನೆ ಕೋಣೆಯಲ್ಲಿ ಅಮ್ಮನ ಮಡಿಲಲ್ಲಿ ಮಲಗಿದ್ದ ಪುಟ್ಟನಿಗೆ ಬೆಳಗಾಗಿದ್ದು ಗೊತ್ತಾಗಿದ್ದು ಗುಡುಗಿನ ಗರ್ಜನೆಯಿಂದ. ಹೆದರಿಕೆಯಿಂದಲೇ  ಹೊದ್ದುಕೊಂಡಿದ್ದ ಮುಸುಕನ್ನು ಜಾರಿಸಿ ಕಿಟಕಿಯ ಕಡೆಗೆ ಮೂಖ ಮಾಡಿದ್ದ.  ತನ್ನ ಪಕ್ಕದಲ್ಲಿ ಅಮ್ಮನಿಲ್ಲವೆಂಬುದ ಅರಿತು ಹೆದರಿಕೆ ಯೆಂದಲೇ ಅಮ್ಮನ ಹುಡುಕ ಹೊರಟ.
                        ಪುಟ್ಟ ಜಯಲಕ್ಷ್ಮಮ್ಮ ಮತ್ತು ಕಾಂತು ಬಟ್ಟರ ಒಬ್ಬನೇ ಮಗ. ಅನಂತ ಭಟ್ಟರ ಮೊಮ್ಮಗ. ನಮ್ಮ ಪುಟ್ಟನಿಗೆ ಈಗ ವರ್ಷ. ಮಲೆನಾಡಿನ ಪುಟ್ಟ ಹಳ್ಳಿ ಇವನ ಊರು. ಅಮ್ಮನ ಬಿಟ್ಟು ಬೇರೆ ಪ್ರಪಂಚವೇ ಅರಿಯದ ನಮ್ಮ ಪುಟಾಣಿಗೆ ಅಮ್ಮನೇ ಎಲ್ಲಾ.
                      ಅನಂತ ಬಟ್ರು ಜಯಲಕ್ಷ್ಮಮ್ಮನವರ ಕರೆದು "ದನಗಳಗೆ ಆಸರ ಕೊಟ್ಯೇನೆ, ಆಗ್ಲಿಂದ ಅರ್ಚಕೊಳ್ತಿದ್ದು. ಅವಕ್ಕೆಲ್ಲ ಅಸರ್ ಹ್ಯಾಕಿ  ಹಾಲು ಕರ್ಕಂದು ಬಾ ಮಗಳೇ " ಎಂದರು. ಅದನ್ನ ಕೇಳಿ ಲಕ್ಷ್ಮಮ್ಮ ಕೊಟ್ಟಿಗೆ ಕಡೆಗೆ ಹೊರಟರು.
ಇತ್ತ ನಮ್ಮ ಪುಟ್ಟನಿಗೆ ಅಮ್ಮನ ಕಾಣದೆ ಗಾಬರಿ ಇಂದ ಮನೆಯೆಲ್ಲ ಓಡಾಡುತಿದ್ದ. ಆಗಾಗ ಕಿವಿಗರಚುತಿದ್ದ ಸಿಡಿಲಿನ ಶಬ್ದಕ್ಕೆ ಹೆದರಿ ಮನೆಯ ಮುಮ್ಬಾಗಿಲಿನ ಸಂದಿಯಲ್ಲಿ ಅವಿತುಕೊಂಡು ಹೊರಗಡೆ ಇಣುಕಿ ನೋಡ ತೊಡಗಿದ. ಮನೆಯ ಮಾಡಿನಿಂದ ಬಿಳುತಿದ್ದ ಮಳೆ ನೀರಿನ ನಡುವೆ ಕಾಣಿಸುತಿದ್ದ ಅಸ್ಪಸ್ಟ ಆಕ್ರತಿ ತನ್ನ ಅಜ್ಜನದು ಎಂದರಿಯಲು ಅವನಿಗೆ ಜಾಸ್ತಿ ಸಮಯ ಹಿಡಿಯಲಿಲ್ಲ. ಆಗತಾನೆ ಕೊಟ್ಟಿಗೆ ಕಡೆ ಇಂದ ಬಂದ ಭಟ್ಟರಿಗೆ ಮೊಮ್ಮಗನ ನೋಡಿ ಮಾತನಾಡಿಸ ತೊಡಗಿದರು
                       "ತಮ್ಮ , ಜಾಯಿ ಕುಡದ್ಯಾ, ಬಾಗಲ ಸಂದಿಲಿ ಎಂಥ ಮಾಡ್ತಿದ್ಯ, ಬ್ಯಾಗೇ ಹೋಗಿ ಆಸರ ಕುಡಿ ಹೋಗು  " ಅಂದರು.
            ಪುಟ್ಟ "ಅಪ್ಪಯ್ಯ ಆಯಿಯೆಲ್ಲಗೆ ಹೋಗಿದ್ದು" .
                     " ಆಯಿ ಕೊಟ್ಟಿಗೆಗೆ ಹಾಲು ಕರಿಲು ಹೋಗಿದ್ದು, ನೀನು ಅವ್ವ ಎನು  ಮಾಡ್ತಿದ್ಲು ನೋಡು ಹೋಗು ಮಗ " ಎಂದು ಪ್ರೀತಿ ಇಂದಲೇ  ಹೇಳಿದರು . ಇದನ್ನು ಕೇಳಿದ ಪುಟ್ಟ ಅಡುಗೆ ಮನೆ ಕಡೆ ಓಡಿದ.
                     ಅವ್ವ ಪುಟ್ಟ ನ ಅಜ್ಜಿ.  ಆಗಲೇ  ಬೆಳಗಿನ ಉಪಹಾರವನ್ನೂ ಸಿದ್ದಗೊಳಿಸುತಿದ್ದ ಅಜ್ಜಿಯ ಕಂಡು "ಅವ್ವ ಎಂಥ ಮಾಡ್ತಿದ್ದೆ " ಎಂದ.
                    ಮೊಮ್ಮಗನ ಮುದ್ದು ಮಾತನ್ನು ಕೇಳಿ ಪುಟ್ಟನೆಡೆಗೆ ತಿರುಗಿದ ಅವ್ವ "ಅಪ್ಪಿ ಸುಡ್ತ್ಹಿದ್ದೆ ಮಗ, ಜಾಯಿ ಕೊಡ್ತೆ, ಬೇಗ ಹೋಗಿ ಮೊರೆ ತೊಲ್ಕಂಡು ಬಾ " ಎಂದರು .
                    ಅಸ್ಟು ಹೊತ್ತಿಗೆ  ಹಾಲು ಕರೆದುಕೊಂಡು ಕೊಟ್ಟಿಗೆ ಕಡೆಯಿಂದ ಬಂದ ಜಯಲಕ್ಷ್ಮಮ್ಮ ಮಗನ ಕಂಡು "ಈಗ ಎದ್ಯ, ಬಾ ಮೊರೆ ತೊಲ್ಸ್ಕೊಡ್ತೆ," ಎಂದು ಪುಟ್ಟಣ ಕೈ ಹಿಡಿದು ಬಚ್ಚಲ ಮನೆ ಕಡೆ ಹೊರಟರು..
                      ಆಗಲೇ ಮಳೆಯ ಆರ್ಬಟ ಕೂಡ ಕೊಂಚ ಕಡಿಮೆಯಾಗಿತ್ತು.. ತೋಟದಲ್ಲಿ ಹಿಂದಿನ ರಾತ್ರಿ ಆದ ಅನಾಹುತ ಗಳ ನೋಡಿ ಬರಲು ಕಾಂತು ಭಟ್ರು ತೋಟದ ಕಡೆಗೆ ಹೊರಟರು...
                      ಅಮ್ಮ ಕೊಟ್ಟ ಹಾಲಿನ ಲೋಟ ಹಿಡಿದು ಮನೆಯ  ಹೊಳ್ಳಿಯ ಮೇಲೆ ಬಂದು ಕುಳಿತ ನಮ್ಮ ಪುಟ್ಟ..
        ಆಗಲೇ ಸೂರ್ಯ ದೇವನು ಮೋಡಗಳ ಮರೆಯಿಂದ ಹೊಂಗಿರಣ ಸುಸುತಿದ್ದ. ಮನೆಯ ಮುಂದಿನ ಗುಲಾಬಿ ಗಿಡದ ಮೇಲೆ ಮುತ್ತಿನಂತೆ ತೋರುತಿದ್ದ ಮಳೆ ಹನಿಗಳನ್ನು ನೋಡುತ್ತಾ ಪುಟ್ಟ ಹಾಲನ್ನು ಹಿರತೋಡಗಿದ. ಮನೆ ಮುಂದೆ ಕಾಣುತಿದ್ದ ವಿಶಾಲ ಗುಡ್ಡ ಬೆಟ್ಟಗಳು  ಸೂರ್ಯನ ಕಿರಣಗಳಿಂದ ಚಿನ್ನದ ಲೇಪನ ಮಾಡಿದ ಹಾಗೆ ಕಾಣುತಿದ್ದವು. ಅಜ್ಜ ಹೇಳುತಿದ್ದ ಕಥೆಗಳಲ್ಲಿ ಬರುವ ಹುಲಿಯಣ್ಣ ಇದೆ ಬೆಟ್ಟದಿಂದ ಬಂದವನಿರಬೇಕು ಎಂದು ಯೋಚಿಸತೊಡಗಿದ. ಆಗಾಗ್ಗೆ ಕೇಳುತಿದ್ದ ನವಿಲುಗಳ ಕೂಗು. ಮನೆಯ ಮಾಡಿನಿಂದ ಟಾಪ್ ಟಾಪ್  ಎಂದು ಬಿಳುತಿದ್ದ ಮಳೆ ಹನಿ . ಆಗಾಗೆ ಬಿಸುತಿದ್ದ ಗಾಳಿಗೆ ತಲೆಯಡಿಸುತಿದ್ದ ಮರಗಳು.. ಎಲ್ಲದಕಿಂತ ಹೆಚ್ಚಾಗಿ ತಂಪಾಗಿದ್ದ ವಾತಾವರಣ ನಮ್ಮ ಪುಟ್ಟನ  ಕಲ್ಪನೆಯಲ್ಲಿ  ಕೃಷ್ಣನ ಕಥೆಯ ಬ್ರಿನ್ದಾವನವೇ ಆಗಿತ್ತು.
                     ಯಾವ ಕಲ್ಮಶವು ಅರಿಯದ ಪುಟ್ಟ ಮನಸು ಅದು. ತನ್ನ ಕಲ್ಪನೆಯೇ ನಿಜ ಎಂದು ನಂಬುವ ಪುಟಾಣಿಗೆ ಅಜ್ಜ ಹೇಳುವ ಕಥೆಗಳು ಯಾವ ಫ್ಯಾಂಟಸಿಗು ಕಡಿಮೆ ಇರಲಿಲ್ಲ. ಎಲ್ಲಾ ಕಥೆಗಳಲ್ಲೂ ಬರುವ ಧೈರ್ಯವಂತ ರಾಜಕುಮಾರ ನಾನೇ ಎಂದು ಕೊಳ್ಳುತಿದ್ದ ಪುಟ್ಟ, ಜೋರಾಗಿ ಇನ್ನೊಮ್ಮೆ ಗುಡಿಗಿದಾಗ ಓಡಿಹೋಗಿ ಅಮ್ಮನ ಸೀರೆಯ ಸೆರಗಲ್ಲಿ ಬಚ್ಚಿಟ್ಟುಕೊಂಡಿದ್ದು  ಮಾತ್ರ ಅಷ್ಟೇ ನಿಜ.....