Friday, March 30, 2012

ಚಿಗುರು ಮನಸು (ಮಳೆಗಾಲದ ಒಂದು ದಿನ )

 ಮಳೆಗಾಲದ ಒಂದು ದಿನ     
                    ಕೋಳಿ ಕೂಗಿ ಸಾಕಷ್ಟು  ಹೊತ್ತಾದರೂ ಸೂರ್ಯ ದೇವನ ದರ್ಶನ ವಾಗಿರಲಿಲ್ಲ. ಕಾರಣ ಅದು ಮಲೆನಾಡಲ್ಲಿ ಮಳೆಗಾಲದ ಸಮಯ. ರಾತ್ರಿ ಇಂದ ಸುರಿಯುತ್ತಿರುವ ದಾರಕಾರ ಮಳೆಗೇ ಮುರಿದು ಬಿದ್ದ ಅಡಿಕೆ ಮರಗಳನ್ನ ಹಿತ್ತಿಲ ಬಾಗಿಲಲ್ಲೇ ನಿಂತು ನೋಡಿ ಮರುಕ ಪಟ್ಟ ಅನಂತ ಭಟ್ಟರು "ಹಾಲ್ಬಿದ್ದ ಮಳೆ ಬಂದು ಇ ಸಲದ ಬೆಳೆ ಎಲ್ಲ ಹಾಳಾತ್ತು" ಎಂದು ಮಳೆ ಗೆ ಹಿಡಿ ಶಾಪ ಹಾಕುತ್ತ ಕೊಟ್ಟಿಗೆಯ ಕಡೆಗೆ ದನಗಳನ್ನ ನೋಡಿ ಬರಲು ಹೊರಟರು.
      ಬೆಚ್ಚನೆ ಕೋಣೆಯಲ್ಲಿ ಅಮ್ಮನ ಮಡಿಲಲ್ಲಿ ಮಲಗಿದ್ದ ಪುಟ್ಟನಿಗೆ ಬೆಳಗಾಗಿದ್ದು ಗೊತ್ತಾಗಿದ್ದು ಗುಡುಗಿನ ಗರ್ಜನೆಯಿಂದ. ಹೆದರಿಕೆಯಿಂದಲೇ  ಹೊದ್ದುಕೊಂಡಿದ್ದ ಮುಸುಕನ್ನು ಜಾರಿಸಿ ಕಿಟಕಿಯ ಕಡೆಗೆ ಮೂಖ ಮಾಡಿದ್ದ.  ತನ್ನ ಪಕ್ಕದಲ್ಲಿ ಅಮ್ಮನಿಲ್ಲವೆಂಬುದ ಅರಿತು ಹೆದರಿಕೆ ಯೆಂದಲೇ ಅಮ್ಮನ ಹುಡುಕ ಹೊರಟ.
                        ಪುಟ್ಟ ಜಯಲಕ್ಷ್ಮಮ್ಮ ಮತ್ತು ಕಾಂತು ಬಟ್ಟರ ಒಬ್ಬನೇ ಮಗ. ಅನಂತ ಭಟ್ಟರ ಮೊಮ್ಮಗ. ನಮ್ಮ ಪುಟ್ಟನಿಗೆ ಈಗ ವರ್ಷ. ಮಲೆನಾಡಿನ ಪುಟ್ಟ ಹಳ್ಳಿ ಇವನ ಊರು. ಅಮ್ಮನ ಬಿಟ್ಟು ಬೇರೆ ಪ್ರಪಂಚವೇ ಅರಿಯದ ನಮ್ಮ ಪುಟಾಣಿಗೆ ಅಮ್ಮನೇ ಎಲ್ಲಾ.
                      ಅನಂತ ಬಟ್ರು ಜಯಲಕ್ಷ್ಮಮ್ಮನವರ ಕರೆದು "ದನಗಳಗೆ ಆಸರ ಕೊಟ್ಯೇನೆ, ಆಗ್ಲಿಂದ ಅರ್ಚಕೊಳ್ತಿದ್ದು. ಅವಕ್ಕೆಲ್ಲ ಅಸರ್ ಹ್ಯಾಕಿ  ಹಾಲು ಕರ್ಕಂದು ಬಾ ಮಗಳೇ " ಎಂದರು. ಅದನ್ನ ಕೇಳಿ ಲಕ್ಷ್ಮಮ್ಮ ಕೊಟ್ಟಿಗೆ ಕಡೆಗೆ ಹೊರಟರು.
ಇತ್ತ ನಮ್ಮ ಪುಟ್ಟನಿಗೆ ಅಮ್ಮನ ಕಾಣದೆ ಗಾಬರಿ ಇಂದ ಮನೆಯೆಲ್ಲ ಓಡಾಡುತಿದ್ದ. ಆಗಾಗ ಕಿವಿಗರಚುತಿದ್ದ ಸಿಡಿಲಿನ ಶಬ್ದಕ್ಕೆ ಹೆದರಿ ಮನೆಯ ಮುಮ್ಬಾಗಿಲಿನ ಸಂದಿಯಲ್ಲಿ ಅವಿತುಕೊಂಡು ಹೊರಗಡೆ ಇಣುಕಿ ನೋಡ ತೊಡಗಿದ. ಮನೆಯ ಮಾಡಿನಿಂದ ಬಿಳುತಿದ್ದ ಮಳೆ ನೀರಿನ ನಡುವೆ ಕಾಣಿಸುತಿದ್ದ ಅಸ್ಪಸ್ಟ ಆಕ್ರತಿ ತನ್ನ ಅಜ್ಜನದು ಎಂದರಿಯಲು ಅವನಿಗೆ ಜಾಸ್ತಿ ಸಮಯ ಹಿಡಿಯಲಿಲ್ಲ. ಆಗತಾನೆ ಕೊಟ್ಟಿಗೆ ಕಡೆ ಇಂದ ಬಂದ ಭಟ್ಟರಿಗೆ ಮೊಮ್ಮಗನ ನೋಡಿ ಮಾತನಾಡಿಸ ತೊಡಗಿದರು
                       "ತಮ್ಮ , ಜಾಯಿ ಕುಡದ್ಯಾ, ಬಾಗಲ ಸಂದಿಲಿ ಎಂಥ ಮಾಡ್ತಿದ್ಯ, ಬ್ಯಾಗೇ ಹೋಗಿ ಆಸರ ಕುಡಿ ಹೋಗು  " ಅಂದರು.
            ಪುಟ್ಟ "ಅಪ್ಪಯ್ಯ ಆಯಿಯೆಲ್ಲಗೆ ಹೋಗಿದ್ದು" .
                     " ಆಯಿ ಕೊಟ್ಟಿಗೆಗೆ ಹಾಲು ಕರಿಲು ಹೋಗಿದ್ದು, ನೀನು ಅವ್ವ ಎನು  ಮಾಡ್ತಿದ್ಲು ನೋಡು ಹೋಗು ಮಗ " ಎಂದು ಪ್ರೀತಿ ಇಂದಲೇ  ಹೇಳಿದರು . ಇದನ್ನು ಕೇಳಿದ ಪುಟ್ಟ ಅಡುಗೆ ಮನೆ ಕಡೆ ಓಡಿದ.
                     ಅವ್ವ ಪುಟ್ಟ ನ ಅಜ್ಜಿ.  ಆಗಲೇ  ಬೆಳಗಿನ ಉಪಹಾರವನ್ನೂ ಸಿದ್ದಗೊಳಿಸುತಿದ್ದ ಅಜ್ಜಿಯ ಕಂಡು "ಅವ್ವ ಎಂಥ ಮಾಡ್ತಿದ್ದೆ " ಎಂದ.
                    ಮೊಮ್ಮಗನ ಮುದ್ದು ಮಾತನ್ನು ಕೇಳಿ ಪುಟ್ಟನೆಡೆಗೆ ತಿರುಗಿದ ಅವ್ವ "ಅಪ್ಪಿ ಸುಡ್ತ್ಹಿದ್ದೆ ಮಗ, ಜಾಯಿ ಕೊಡ್ತೆ, ಬೇಗ ಹೋಗಿ ಮೊರೆ ತೊಲ್ಕಂಡು ಬಾ " ಎಂದರು .
                    ಅಸ್ಟು ಹೊತ್ತಿಗೆ  ಹಾಲು ಕರೆದುಕೊಂಡು ಕೊಟ್ಟಿಗೆ ಕಡೆಯಿಂದ ಬಂದ ಜಯಲಕ್ಷ್ಮಮ್ಮ ಮಗನ ಕಂಡು "ಈಗ ಎದ್ಯ, ಬಾ ಮೊರೆ ತೊಲ್ಸ್ಕೊಡ್ತೆ," ಎಂದು ಪುಟ್ಟಣ ಕೈ ಹಿಡಿದು ಬಚ್ಚಲ ಮನೆ ಕಡೆ ಹೊರಟರು..
                      ಆಗಲೇ ಮಳೆಯ ಆರ್ಬಟ ಕೂಡ ಕೊಂಚ ಕಡಿಮೆಯಾಗಿತ್ತು.. ತೋಟದಲ್ಲಿ ಹಿಂದಿನ ರಾತ್ರಿ ಆದ ಅನಾಹುತ ಗಳ ನೋಡಿ ಬರಲು ಕಾಂತು ಭಟ್ರು ತೋಟದ ಕಡೆಗೆ ಹೊರಟರು...
                      ಅಮ್ಮ ಕೊಟ್ಟ ಹಾಲಿನ ಲೋಟ ಹಿಡಿದು ಮನೆಯ  ಹೊಳ್ಳಿಯ ಮೇಲೆ ಬಂದು ಕುಳಿತ ನಮ್ಮ ಪುಟ್ಟ..
        ಆಗಲೇ ಸೂರ್ಯ ದೇವನು ಮೋಡಗಳ ಮರೆಯಿಂದ ಹೊಂಗಿರಣ ಸುಸುತಿದ್ದ. ಮನೆಯ ಮುಂದಿನ ಗುಲಾಬಿ ಗಿಡದ ಮೇಲೆ ಮುತ್ತಿನಂತೆ ತೋರುತಿದ್ದ ಮಳೆ ಹನಿಗಳನ್ನು ನೋಡುತ್ತಾ ಪುಟ್ಟ ಹಾಲನ್ನು ಹಿರತೋಡಗಿದ. ಮನೆ ಮುಂದೆ ಕಾಣುತಿದ್ದ ವಿಶಾಲ ಗುಡ್ಡ ಬೆಟ್ಟಗಳು  ಸೂರ್ಯನ ಕಿರಣಗಳಿಂದ ಚಿನ್ನದ ಲೇಪನ ಮಾಡಿದ ಹಾಗೆ ಕಾಣುತಿದ್ದವು. ಅಜ್ಜ ಹೇಳುತಿದ್ದ ಕಥೆಗಳಲ್ಲಿ ಬರುವ ಹುಲಿಯಣ್ಣ ಇದೆ ಬೆಟ್ಟದಿಂದ ಬಂದವನಿರಬೇಕು ಎಂದು ಯೋಚಿಸತೊಡಗಿದ. ಆಗಾಗ್ಗೆ ಕೇಳುತಿದ್ದ ನವಿಲುಗಳ ಕೂಗು. ಮನೆಯ ಮಾಡಿನಿಂದ ಟಾಪ್ ಟಾಪ್  ಎಂದು ಬಿಳುತಿದ್ದ ಮಳೆ ಹನಿ . ಆಗಾಗೆ ಬಿಸುತಿದ್ದ ಗಾಳಿಗೆ ತಲೆಯಡಿಸುತಿದ್ದ ಮರಗಳು.. ಎಲ್ಲದಕಿಂತ ಹೆಚ್ಚಾಗಿ ತಂಪಾಗಿದ್ದ ವಾತಾವರಣ ನಮ್ಮ ಪುಟ್ಟನ  ಕಲ್ಪನೆಯಲ್ಲಿ  ಕೃಷ್ಣನ ಕಥೆಯ ಬ್ರಿನ್ದಾವನವೇ ಆಗಿತ್ತು.
                     ಯಾವ ಕಲ್ಮಶವು ಅರಿಯದ ಪುಟ್ಟ ಮನಸು ಅದು. ತನ್ನ ಕಲ್ಪನೆಯೇ ನಿಜ ಎಂದು ನಂಬುವ ಪುಟಾಣಿಗೆ ಅಜ್ಜ ಹೇಳುವ ಕಥೆಗಳು ಯಾವ ಫ್ಯಾಂಟಸಿಗು ಕಡಿಮೆ ಇರಲಿಲ್ಲ. ಎಲ್ಲಾ ಕಥೆಗಳಲ್ಲೂ ಬರುವ ಧೈರ್ಯವಂತ ರಾಜಕುಮಾರ ನಾನೇ ಎಂದು ಕೊಳ್ಳುತಿದ್ದ ಪುಟ್ಟ, ಜೋರಾಗಿ ಇನ್ನೊಮ್ಮೆ ಗುಡಿಗಿದಾಗ ಓಡಿಹೋಗಿ ಅಮ್ಮನ ಸೀರೆಯ ಸೆರಗಲ್ಲಿ ಬಚ್ಚಿಟ್ಟುಕೊಂಡಿದ್ದು  ಮಾತ್ರ ಅಷ್ಟೇ ನಿಜ.....

                     

6 comments:

  1. Good ya Gajanan!! Well Written, Keep it up!! You wrote it your own thats 'kabil hai tharif'. nimage utthama lekhakanaaguva ella lakshana ide, pls continue......:-)

    ReplyDelete
  2. ನನಗೆ ಈಗಲೇ ಮಳೆ ಬಂದ ನಿಂತ ಹಾಗೆ ಅನಿಸುತಿದೆ, ಅದ್ಭುತವಾದ ಲೀಖನ ...ಒಂದು ಕಾಲ್ಪನಿಕ ಲೋಕಕ್ಕೆ ಹೋಗಿ ಬಂದ ಹಾಗೆ ಇದೆ ....

    ReplyDelete
  3. Nice narration.. continue with this situation oriented story..

    ReplyDelete
  4. Eega thane bandu ninthu hoda nammoorina maleya nenapayithu. Nangu Balya bekenisithu... putta hudugana manassu chennagi chitrisallagide.

    Hageye Thamma barahada maleyannu surisi !

    ReplyDelete